‘ಬ್ಯೂಟಿ’ ಚಿತ್ರದ ಟ್ರೈಲರ್ ಬಿಡುಗಡೆ;
ಬೆಂಗಳೂರು: ಮಹಿಳಾ ಪ್ರಧಾನ ಕಥಾಹಂದರವನ್ನು ಒಳಗೊಂಡಿರುವ ‘ಬ್ಯೂಟಿ’ ಚಿತ್ರದ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಮಹಿಳೆಯರ ಗೌರವ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಜವಾಬ್ದಾರಿಯಂತಹ ಅಂಶಗಳನ್ನು ಮನರಂಜನೆಯೊಂದಿಗೆ ತೆರೆಗೆ ತರುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.

ಬ್ಯೂಟಿ’ ಟ್ರೈಲರ್ ಬಿಡುಗಡೆ; ಮಹಿಳಾ ಪ್ರಧಾನ ಕಥೆಯ ಮೇಲೆ ಹೆಚ್ಚಿದ ನಿರೀಕ್ಷೆ ಪತ್ರಕರ್ತರ ದಿನಾಚರಣೆಯ ಪ್ರಯುಕ್ತ ಪತ್ರಿಕೆ ಯ ಮುಖ್ಯಸ್ಥರಾದ ಭಾಷಾ ಟ್ರೈಲರ್ ಬಿಡುಗಡೆ ಮಾಡಿದರು
ಕಲ್ಪವೃಕ್ಷ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ, ಪಿ. ಮುರಳಿ ಕೃಷ್ಣ ಅರ್ಪಿಸುತ್ತಿರುವ ಈ ಚಿತ್ರಕ್ಕೆ ರಾಜಾ ರವಿ ಕುಮಾರ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದು, ತನುಜಾ ಮುರಳಿ ಕೃಷ್ಣ ನಿರ್ಮಾಪಕರಾಗಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ನೀಡಿದ್ದು, ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಟ್ರೈಲರ್ಗೆ ಮತ್ತಷ್ಟು ಮೆರುಗು ತಂದಿವೆ.

ಚಿತ್ರದ ನಾಯಕ ರವಿಕಾಂತ್ ಈ ಪಾತ್ರಕ್ಕಾಗಿ ವಿಶೇಷವಾಗಿ ಭರತನಾಟ್ಯವನ್ನು ಅಭ್ಯಾಸ ಮಾಡಿದ್ದು, ನಾಯಕಿಯಾಗಿ ಮಹಾಲಕ್ಷ್ಮಿ ಅಭಿನಯಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸುಂದರ ಮುಖಕ್ಕಿಂತ ಸುಂದರ ಮನಸ್ಸು ಮುಖ್ಯ” ಎಂದು ಹೇಳಿ, ಉತ್ತಮ ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಬೆಂಬಲಿಸುವಂತೆ ಪ್ರೇಕ್ಷಕರಿಗೆ ಮನವಿ ಮಾಡಿದರು.
ಚಿತ್ರದ ಬಹುತೇಕ ಚಿತ್ರೀಕರಣ ಐತಿಹಾಸಿಕ ಹಾಗೂ ನೈಸರ್ಗಿಕ ಸೌಂದರ್ಯಕ್ಕೆ ಹೆಸರಾದ ಮೇಲ್ಕೋಟೆಯಲ್ಲಿ ನಡೆದಿದ್ದು, ಟ್ರೈಲರ್ನಲ್ಲಿ ಅಲ್ಲಿನ ದೃಶ್ಯ ವೈಭವ ಗಮನ ಸೆಳೆಯುತ್ತದೆ. ಕನ್ನಡದ ಖ್ಯಾತ ಗಾಯಕರು ಹಾಡುಗಳಿಗೆ ಧ್ವನಿಯಾಗಿದ್ದು, ಸಂಗೀತವೂ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರವನ್ನು ಬಾಗೂರು ಟಾಕೀಸ್ ಮೂಲಕ ಬಾಗೂರು ಪ್ರಶಾಂತ್ ವಿತರಣೆ ಮಾಡುತ್ತಿದ್ದು, ಮೊದಲ ಹಂತದಲ್ಲಿ ಸುಮಾರು 35 ಚಿತ್ರಮಂದಿರಗಳಲ್ಲಿ ಜುಲೈ 10ರಂದು ಬಿಡುಗಡೆ ಮಾಡುವ ಯೋಜನೆ ರೂಪಿಸಲಾಗಿದೆ.
ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಬೆಳವಣಿಗೆ, ನಿರ್ಮಾಪಕರು ಎದುರಿಸುತ್ತಿರುವ ಸವಾಲುಗಳು ಹಾಗೂ ಉತ್ತಮ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ಬೆಂಬಲ ನೀಡುವ ಅಗತ್ಯದ ಕುರಿತು ಚರ್ಚೆ ನಡೆಯಿತು.
ಮಹಿಳಾ ಪ್ರಧಾನ ಕಥೆಯೊಂದಿಗೆ ಸಾಮಾಜಿಕ ಕಾಳಜಿಯನ್ನೂ ಹೊತ್ತಿರುವ ‘ಬ್ಯೂಟಿ’ ಸಿನಿಮಾ, ಟ್ರೈಲರ್ ಮೂಲಕವೇ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ನಿರ್ದೇಶಕರು ಮಾತನಾಡಿ ಕನ್ನಡ ಸಿನಿಮಾ ಗಳನ್ನು ಕನ್ನಡಿಗರು ಜಾಸ್ತಿ ನೋಡಬೇಕು ಬ್ಯೂಟಿ ಸಿನಿಮಾ ತುಂಬಾ ಚನ್ನಾಗಿ ಮೂಡಿಬಂದಿದೆ ಎಲ್ಲರು ನೋಡಿ ಹರಸಿ ಎಂದರು ಕಾರ್ಯಕ್ರಮದಲ್ಲಿ v. ಮನೋಹರ್, ಕುಶಾಲ್ ಕೃಷ್ಣ ಕುಸುಮ ಕೃಷ್ಣ,ಅನ್ನಪೂರ್ಣ, ಅಂಜನಾ, ಶಿವಮೊಗ್ಗ ರಾಮಣ್ಣ, ಮನ್ಮೋಹನ್, ಚಕ್ರವರ್ತಿ ದಾವಣಗೆರೆ, ಮಹೇಶ್ ಕುಕ್ಕೆ, ಹೇಮಂತ್ ಕುಮಾರ್, ಸಿದ್ದಾರ್ಥ್ ಕಾರಟಗಿ, ರಾಗ್ವೀರ್ ಸುರಾಗ, ಬೇಬಿ ಆಯುಷ್ಕ ಶೆಟ್ಟಿ, ಉಪಸ್ಥಿತರಿದ್ದರು









