Sanju weds geeta 2 Review 2. ಸಂಜು ವೆಡ್ಸ್ ಗೀತಾ 2. ಚಿತ್ರ ವಿಮರ್ಶೆ 2
ಸಂಜು ವೆಡ್ಸ್ ಗೀತಾ 2. ಚಿತ್ರ ವಿಮರ್ಶೆ 2
ಚಿತ್ರ – ಸಂಜು ವೆಡ್ಸ್ ಗೀತಾ 2
ನಿರ್ಮಾಣ ಸಂಸ್ಥೆ –ಪವಿತ್ರ ಇಂಟರ್ನ್ಯಾಷನಲ್ ಮೂವಿ ಮೇಕರ್ಸ್
ನಿರ್ಮಾಪಕರು – ಛಲವಾದಿ ಕುಮಾರ್
ನಿರ್ದೇಶನ – ನಾಗಶೇಕರ್
ಛಾಯಾಗ್ರಹಣ – ಸತ್ಯ ಹೆಗಡೆ
ಸಂಗೀತ – ಶ್ರೀಧರ್ ಸಂಭ್ರಮ್
Rating – 3/5
ಕಲಾವಿದರು – ಶ್ರೀನಗರ ಕಿಟ್ಟಿ, ಸಾಧುಕೋಕಿಲ, ರಂಗಾಯಣ ರಘು, ತಬಲನಾಣಿ, ಚೇತನ್ ಚಂದ್ರ, ರಚಿತಾರಾಮ್, ರಾಗಿಣಿ, ಸಂಪತ್ ರಾಜ್, ಮುಂತಾದವರು.

2011ರಲ್ಲಿ ಚಿತ್ರ ಪ್ರೇಮಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಹ ಚಿತ್ರ ಸಂಜು ವೆಡ್ಸ್ ಗೀತಾ. ಅದೊಂದು ರೊಮ್ಯಾಂಟಿಕ್ ಟ್ರಾಜಿಡಿ ಮ್ಯೂಸಿಕಲ್ ಚಿತ್ರ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಜೊತೆಯಾಗಿ ಅಭಿನಯಿಸಿದಂತ ಚಿತ್ರ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಇದೇ ನಾಗಶೇಖರ್. ಆ ಸಿನಿಮಾದ ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಹಿಟ್ ಆಗಿತ್ತು. ಇಂದಿಗೂ ಕೇಳುಗರ ಫೇವರೇಟ್ ಲಿಸ್ಟ್ ನಲ್ಲಿ ಈ ಚಿತ್ರದ ಹಾಡುಗಳು ರಾರಾಜಿಸುತ್ತಲೇ ಇವೆ.
ಆದರೆ ಈಗ 2025 ರಲ್ಲಿ 14 ವರ್ಷಗಳ ನಂತರ ಬಿಡುಗಡೆಯಾಗಿರುವ “ಸಂಜು ವೆಡ್ಸ್ ಗೀತಾ ಭಾಗ 2” ಪ್ರೇಕ್ಷಕರ ನಿರೀಕ್ಷೆಯನ್ನು ಸುಳ್ಳುಮಾಡಿತ್ತು. ಅದೇ ನಾಗಶೇಖರ್ ನಿರ್ದೇಶನ ಮಾಡಿದ್ದಾ..? ಈ ಚಿತ್ರ ಎಂದು ಅನುಮಾನ ಮೂಡಿತ್ತು.
ನಾಗಶೇಖರ್ ಕಥೆಯ ನಿರೂಪಣೆಯಲ್ಲಿ ಎಡವಿದರಾ..? ಅನ್ನಿಸಿತ್ತು
ಕನ್ನಡ ಚಿತ್ರಗಳ ಇತಿಹಾಸದಲ್ಲಿ ಹೆಸರಾಗುವಂತ ಚಿತ್ರಗಳನ್ನು ನೀಡಿದ ನಾಗಶೇಖರ್ ಯಾಕೆ ಹೀಗೆ ಎಡವಿದ್ದಕ್ಕೆ ಹಲವಾರು ಕಾರಣಗಳನ್ನು ನೀಡಿ ಮತ್ತೆ ಆ ಚಿತ್ರಕ್ಕೆ ಒಂದಷ್ಟು ನ್ಯಾಯ ನೀಡುವ ಸಲುವಾಗಿ ಮತ್ತೆ ಮತ್ತಷ್ಟು ದೃಶ್ಯಗಳನ್ನು ಸೇರಿಸಿ
ಮರು ಬಿಡುಗಡೆ ಮಾಡುತ್ತಿದ್ದಾರೆ.

ಸಿನಿಮಾ ಸ್ವಿಟ್ಜರ್ಲೆಂಡ್ ನ ಅದ್ಬುತ ಸ್ಥಳಗಳಲ್ಲಿ ಚಿತ್ರೀಕರೀಸಿದ್ದಾರೆ. ಒಂದೊಂದು ಫ್ರೇಮ್ ಬಹಳ ಅದ್ದೂರಿಯಾಗಿ ಮೂಡಿಬಂದಿದೆ. ನಿರ್ಮಾಪಕ ಛಲವಾಧಿ ಕುಮಾರ್ ರವರ ಹಣ ಶಿಡ್ಲಘಟ್ಟ ದಿಂದ ಸ್ವಿಟ್ಜರ್ಲೆಂಡ್ ವರೆಗೂ ನೀರಿನಂತೆ ಹರಿದಿರುವುದು ತೆರೆಯ ಮೇಲೆ ಕಾಣುತ್ತದೆ.
ಸತ್ಯ ಹೆಗಡೆಯ ಕ್ಯಾಮಾರದಲ್ಲಿ ಚಿತ್ರದ ಪ್ರತೀ ಫ್ರೇಮ್ ತುಂಬಾ ಚನ್ನಾಗಿ ರಿಚ್ಚಾಗಿ ಕಾಣುತ್ತದೆ.
ಹಿನ್ನೆಲೆ ಸಂಗೀತ, ಹಾಗೂ ಎರಡು ಹಾಡುಗಳು ಕೇಳುವಂತಿದೆ ಆದರೆ ಶ್ರೀಧರ್ ಸಂಭ್ರಮ್ ರವರ ಸಂಗೀತದಲ್ಲಿ ಇನ್ನೂ ಹಾಡುಗಳು ಚನ್ನಾಗಿ ಮೂಡಿ ಬಂದಿದ್ದರೆ ಚನ್ನಾಗಿರುತ್ತಿತ್ತು. ಎನ್ನುವ ಪ್ರೇಕ್ಷಕನ ಕೊರಗು ಹಾಗೇ ಇದೆ.

ಮೊದಲ ಸಂಜು ವೆಡ್ಸ್ ಗೀತಾ ಚಿತ್ರದ ಹಾಡುಗಳ ಸಮಕ್ಕೆ ಯಾವ ಹಾಡುಗಳು ಪೈಪೋಟಿಗೆ ಇಳಿದಿಲ್ಲ ಎನ್ನುವುದೇ ಬೇಸರದ ಸಂಗತಿ.
ಇನ್ನು ಇಲ್ಲಿ ನಾಯಕ ನಟನಾಗಿ ಶ್ರೀನಗರ ಕಿಟ್ಟಿ, ರಚಿತರಾಮ್ ನಾಯಕಿಯಾಗಿ ಚಿತ್ರದ ಪ್ರಮುಖ ಪಾತ್ರದಲ್ಲಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಇಬ್ಬರ ಜೋಡಿ ಚನ್ನಾಗಿ ಕಾಣುತ್ತದೆ. ಆದರೆ ಇಲ್ಲಿ ಪ್ರೀತಿ ಫೇಲಾಗಿದೆ, ಲವ್ ಸೆಂಟಿಮೆಂಟ್ ಹೈಲೈಟ್ ಆಗಿಲ್ಲ. ಸಿನಿಮಾದ ಕೊನೆಯ ದೃಶ್ಯ ಇನ್ನೂ ಚನ್ನಾಗಿ ಮೂಡಿ ಬರಬೇಕಿತ್ತು ಬೇಗ ಮುಗಿಸಿದರೇನೋ ಅನ್ನಿಸುತ್ತದೆ.
ಇದು ಸಂಜು ವೆಡ್ಸ್ ಗೀತಾ ಎನ್ನುವುದಕ್ಕಿಂತ
ಇಡ್ಲಿ ವೆಡ್ಸ್ ಸೀರೆ ಎನ್ನಬಹುದು.

ಸಿನಿಮಾದಲ್ಲಿ ಸೀರೆಯದೇ ಒಂದು ಪ್ರಮುಖ ಪಾತ್ರ ಇದೆ. ಇಲ್ಲಿ ನಾಯಕ, ನಾಯಕಿಯರ ಪ್ರೀತಿಗೆ ಕಾರಣವೇ ಸೀರೆ ಮತ್ತು ಇಡ್ಲಿ.
ಒಬ್ಬ ಕೋಟ್ಯಾಧಿಪತಿ ಶ್ರೀಮಂತನ ಮಗಳು ಗೀತ ಮಿಸ್ ಕರ್ನಾಟಕ ಸ್ಪರ್ಧೆಗೆ ಹೋಗುವಾಗ ಅಚಾನಕ್ಕಾಗಿ ರಸ್ತೆಯಲ್ಲಿ ಸೀರೆ ಮಾರುವ ನಾಯಕ ಸಂಜು ಸಿಗುತ್ತಾನೆ ಅಲ್ಲಿ ಮೊದಲಿಗೆ ನಾಯಕಿಗೆ ಸೀರೆ ಕೊಟ್ಟು ಸ್ಪರ್ಧೆಗೆ ಕಳಿಸುತ್ತಾನೆ. ಅದರಿಂದ ಗೆದ್ದ.? ನಾಯಕಿ ನಿತ್ಯ ಅವನನ್ನು ಹುಡುಕುವುದೇ ಕಾಯಕ ಆಗ ಅವರ ಮಧ್ಯೆ ಕೊಂಡಿಯಾಗುವುದೇ ಮತ್ತೊಂದು ವಸ್ತು ಇಡ್ಲಿ.

ನಾಯಕ ತಾನು ದುಡಿದ ಹಣದಲ್ಲಿ ಪ್ರತೀ ದಿನ ಬಡವರಿಗೆ ಎರಡು ಇಡ್ಲಿ ದಾನ ಮಾಡುತ್ತಾನೆ. ಇದರಿಂದ ಪ್ರೇರಿತಳಾದ ನಾಯಕಿ ನೂರಾರು ಜನಕ್ಕೆ ಇಡ್ಲಿ ದಾನ ಮಾಡುತ್ತಾಳೆ. ನಂತರ ನಾಯಕಿ ಇಡ್ಲಿಗೆ ಜೇನು, ಮತ್ತೊಂದರಲ್ಲಿ ವಿಷ ಬೆರೆಸಿ ಕೇಳುತ್ತಾಳೆ ನನ್ನ ಪ್ರೀತಿಸುವುದಾದರೆ, ಇಡ್ಲಿಗೆ ಜೇನು ಹಾಕು ಇಲ್ಲದಿದ್ದರೆ ವಿಷ ಬೆರೆಸು ಅಂತ.
ಪ್ರೇಮ ನಿವೇದನೆಗೆ ಇಡ್ಲಿಯ ಮೊರೆ ಹೋಗುತ್ತಾಳೆ.
ಇಲ್ಲಿಂದ ಶುರವಾದ ಪ್ರೇಮ ಕಥೆ,
ಅಪ್ಪನ ವಿರುದ್ಧ ನಿಂತು ಮದುವೆ ಮಾಡಿಕೊಳ್ಳುತ್ತಾರೆ.
ಬೀದಿಯಲ್ಲಿ ರೇಷ್ಮೆ ಸೀರೆ ಮಾರುವ.? ನಾಯಕ ಮುಂದೆ ಶಿಡ್ಲಘಟ್ಟ ಸೀರೆ ಎಂಬ ಹೆಸರಿನಲ್ಲಿ ವಿಶ್ವ ಮಟ್ಟದಲ್ಲಿ ಬ್ರಾಂಡ್ ಮಾಡುತ್ತಾನೆ. ಕೋಟ್ಯಾಧೀಶ್ವರ ಅಪ್ಪನ ಮಟ್ಟಕ್ಕೆ ಬೆಳೆಯಲು ಸಂಜು ಮತ್ತು ಗೀತ ರಾತ್ರಿ ಹಗಲು ದುಡಿದು ಶಿಡ್ಲಘಟ್ಟ ಸೀರೆ ಎಂಬ ಬ್ರಾಂಡ್ ಅನ್ನು ವಿಶ್ವ ಮಟ್ಟಕ್ಕೆ ಬೆಳೆಸುತ್ತಾರೆ.
ಅದಕ್ಕಾಗಿ ಹಗಲು ರಾತ್ರಿ ದುಡಿದು, ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಾರೆ.

ಸೀರೆ ಯಲ್ಲಿ ದಾರ ತೆಗೆಯುವವರ ಜೀವನ ಬಹಳ ಕಷ್ಟಕ್ಕೆ ಸಿಲುಕುತ್ತದೆ,
ತುಂಬಾ ಜನರಿಗೆ ಕ್ಯಾನ್ಸರ್ ನಂತಹ ಮಾರಕ ಕಾಯಿಲೆ ಆವರಿಸಿಕೊಂಡು ಜೀವ ತೆಗೆಯುತ್ತದೆ.
ಅದನ್ನು ಅರಿತ ನಾಯಕ ಸಂಜು ಮೊಟ್ಟ ಮೊದಲ ಬಾರಿಗೆ ಶಿಡ್ಲಘಟ್ಟಕ್ಕೆ ದಾರ ತೆಗೆಯುವ ಮೆಷಿನ್ ತಂದು ಕೆಲಸಗಾರರಿಗೆ ಸಹಾಯ ಮಾಡುತ್ತಾನೆ,ಶಿಡ್ಲಘಟ್ಟ ದಲ್ಲಿ ನೇಯುವ ಎಲ್ಲಾ ಸೀರೆಗಳನ್ನು ತನ್ನ ಶಿಡ್ಲಘಟ್ಟ ಸಿಲ್ಕ್ ಸಂಸ್ಥೆಗೆ ಅಮದು ಮಾಡಿಕೊಳ್ಳುತ್ತಾನೆ.

ಸಂಜು, ಗೀತರ ಹತ್ತನೇ ವೆಡ್ಡಿಂಗ್ ಸಂಭ್ರಮದಲ್ಲಿ ಕಥೆ ಶುರುವಾಗುತ್ತದೆ ಮಿಕ್ಕಿದ್ದೆಲ್ಲಾ ನೆನಪುಗಳು. ಫ್ಲಾಷ್ ಬ್ಯಾಕ್ ನಲ್ಲಿ ಚಿತ್ರ ಸಾಗುತ್ತದೆ. ಕೆಲವೂಮ್ಮೆ ವಾಸ್ತವ ಯಾವುದು, ಫ್ಲಾಷ್ ಬ್ಯಾಕ್ ಯಾವುದು ಎನ್ನುವುದು ಮೊದಲು ಗೊಂದಲಮಯವಾಗಿತ್ತು ಈಗ ಅದನ್ನೆಲ್ಲಾ ರಿಪೇರಿ ಮಾಡಿದ್ದಾರೆ.