“Veera Chandrahasa movie Review ” “ವೀರ ಚಂದ್ರಹಾಸ” ಚಿತ್ರ ವಿಮರ್ಶೆ. ಭಾರತ ಚಿತ್ರರಂಗದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವಿಭಿನ್ನ ಪ್ರಯತ್ನದ ಚಿತ್ರ

ಚಿತ್ರ: ವೀರ ಚಂದ್ರಹಾಸ
ನಿರ್ಮಾಣ:  ಓಂಕಾರ್ ಮೂವೀಸ್ & ರವಿ ಬಸ್ರೂರು ಮೂವೀಸ್ ಬ್ಯಾನರ್, ಎನ್‌.ಎಸ್ ರಾಜ್‌ಕುಮಾರ್
ನಿರ್ದೇಶನ: ರವಿ ಬಸ್ರೂರು
ತಾರಾಗಣ: ಶಿವರಾಜ್‌ಕುಮಾರ್, ಗರುಡ ರಾಮ್, ಶಿಥಿಲ್ ಶೆಟ್ಟಿ, ನಾಗಶ್ರೀ ಜಿ.ಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ಥಿ, ಉದಯ್ ಕಡಬಾಳ್, ರವೀಂದ್ರ ದೇವಾಡಿಗ, ನಾಗಶ್ರೀ ಸರ್ವೇಗಾರ್, ಗುಣಶ್ರೀ ಎಂ ನಾಯಕ್, ಶ್ರೀಧರ್ ಕಾಸರಗೋಡು, ಶ್ವೇತಾ ಅರೆಹೊಳೆ, ಪ್ರಜ್ವಲ್ ಕಿನ್ನಾಳ್ ಮುಂತಾದವರು

ಭಾರತ ಚಿತ್ರರಂಗದಲ್ಲೇ ಪ್ರಪ್ರಥಮ ಬಾರಿಗೆ ವಿಭಿನ್ನ ಪ್ರಯತ್ನದ ಚಿತ್ರ “ವೀರ ಚಂದ್ರಹಾಸ”.
ಹೌದು ಸಿನಿಮಾ ಮಾಧ್ಯಮ ಹುಟ್ಟುವ ಮೊದಲು ಹುಟ್ಟಿದ್ದು ಜನಪದ, ಹಾಡು ಹಸೆ, ನಾಟಕ, ರಂಗಭೂಮಿ ಹಾಗೂ ಯಕ್ಷಗಾನ.

ನಮ್ಮ ಮಣ್ಣಿನ ಸೊಗಡಿನ ಯಕ್ಷಗಾನ “ವೀರ ಚಂದ್ರಹಾಸ” ಸಿನಿಮಾವಾಗಿ ತೆರೆ ಮೇಲೆ ಬಂದಿದೆ. ಮಾಮೂಲಿನ ಸಿನಿಮಾಗಳಿಗಿಂತ ಇದೊಂದು ವಿಭಿನ್ನ ಅನುಭವ.

ವೀರ ಚಂದ್ರಹಾಸ. ಇದೊಂದು ಪೌರಾಣಿಕ ಕಥೆ, ಅನಾಥ ಹುಡುಗನೊಬ್ಬ ವೀರ ಚಂದ್ರಹಾಸನಾಗಿ ಬೆಳೆದು ಶೌರ್ಯ, ಧೈರ್ಯ ದಿಂದಲೇ ತನ್ನ ಅಸ್ತಿತ್ವವನ್ನು ಅಜರಾಮರವಾಗುವಂತೆ ತನ್ನನ್ನು ಸೃಷ್ಟಿಸಿಕೊಂಡ ಚಂದ್ರಹಾಸನ ಕಥೆಯನ್ನು ವೀರ ಚಂದ್ರಹಾಸ ಎಂಬ ಸಿನಿಮಾವಾಗಿ ಇಂದು ತೆರೆಯ ಮೇಲೆ ಬಂದಿರುವುದು ಹೆಮ್ಮೆಯ ವಿಷಯ.
ಯಕ್ಷಗಾನ ರೂಪದ ಈ ಕಥೆಯನ್ನು ಸ್ವಲ್ಪ ಪ್ರೇಕ್ಷಕರಿಗೆ ಇಷ್ಟವಾಗುವ ನಿಟ್ಟಿನಲ್ಲಿ ಬದಲಿಸಿ ಸಿನಿಮಾ ಆಗಿ ತೆರೆಗೆ ಬಂದಿದೆ.
ವಿ.ಎಫ್.ಎಕ್ಸ್. ಬಳಸಿ  ಹೊಸ ಪ್ರಪಂಚಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುವ ಪ್ರಯತ್ನವನ್ನು ಸಂಗೀತ ನಿರ್ದೇಶಕ ರವಿ ಬಸ್ಸೂರು ಮಾಡಿದ್ದಾರೆ,
ದಕ್ಷಿಣ ಕನ್ನಡದ ಯಕ್ಷಗಾನ ಕಂದಗಳನ್ನು , ವೇಷ ಭೂಷಣಗಳನ್ನು ಹೇಗಿದೆಯೋ ಹಾಗೆಯೇ ಯಥಾವತ್ತಗಿ  ಸಿನಿಮಾದಲ್ಲಿ ತೋರಿಸಲಾಗಿದೆ. ಯಕ್ಷಗಾನ ಕ್ಷೇತ್ರದ ಮಹತ್ವದ ಭಾಗವತರುಗಳಾದ ಪಟ್ಲ ಸತೀಶ್ ಶೆಟ್ಟಿ, ರಾಘವೇಂದ್ರ ಆಚಾರ್ಯ ಜನ್ಸಾಲೆ ಸೇರಿ ಹಲವಾರ ಕಂಠದಿಂದ ಯಕ್ಷ ಪದಗಳು ಕೇಳಲು ಇಲ್ಲಿ ಅವಕಾಶವಿದೆ. ಅದೊಂದು ವಿಶೇಷ ಪದವನ್ನು ಯಕ್ಷಗಾನದ ಸಿರಿಕಂಠ ಕಾಳಿಂಗ ನಾವುಡರ ಕಂಠದಲ್ಲಿ ಕೇಳುವಂತಹ  ಅವಕಾಶವನ್ನು ಚಿತ್ರ ರಸಿಕರಿಗೆ
ಚಿತ್ರದ ತಂಡ ಮಾಡಿಕೊಟ್ಟಿದೆ‌.

ಚಿತ್ರದಲ್ಲಿ   ಅಯರ್ ಬೈಲ್ ನವೀನ ಶೆಟ್ರ ಅಭಿನಯ ಚನ್ನಾಗಿ ಮೂಡಿಬಂದಿದೆ. ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಯಕ್ಷಗಾನದ ಗೆಟಪ್ಪಿನಲ್ಲಿ ಬಣ್ಣ ಹಚ್ಚ ಅಭಿನಯಿಸಿದ್ದಾರೆ.
ಆದರೆ ಸಿನಿಮಾದಲ್ಲಿ ಪೂರ್ಣವಾಗಿ ಯಕ್ಷಗಾನದ ಕುಣಿತಗಳನ್ನು ಬಳಸಿಕೊಳ್ಳದೇ ಸಿನಿಮಾ ಶೈಲಿಗೆ ಎಷ್ಟು ಬೇಕೋ ಅಷ್ಟು ಬಳಸಿಕೊಂಡಿದ್ದಾರೆ.

 ಇದರ ಹೊರತಾಗಿ ಚಿತ್ರದಲ್ಲಿ ಹಾಸ್ಯಕ್ಕೆ ಹೆಚ್ಚು ಮಹತ್ವ ನೀಡಿರುವುದು,  ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ,  ಕಥೆಯ ನಡುವೆ ಹಾಸ್ಯ ದೃಶ್ಯಗಳು ಇರುವುದರಿಂದ ಚಿತ್ರ ನೋಡಿಸಿಕೊಂಡು ಹೋಗುತ್ತದೆ.

ಇಲ್ಲಿವರೆಗೂ ತೆರೆಯ ಮೇಲೆ ಕೃತಕ ದೃಶ್ಯಗಳನ್ನು, ಆಕ್ಷನ್ ಸೀನ್ ಗಳನ್ನು, ಸಾಮಾಜಿಕ ಜೀವನ ಶೈಲಿಯ ಅತಿರೇಖದ ಚಿತ್ರಗಳನ್ನು ನೋಡಿದ್ದವರಿಗೆ ಒಂದು ರೀತಿಯ ಹೊಸ ಅನುಭವವನ್ನು ಈ ಚಿತ್ರ ಕಟ್ಟಿಕೊಡುತ್ತದೆ.

ಇದರಲ್ಲಿ ಹಲವಾರು ದಕ್ಷಿಣ ಕನ್ನಡದ ಪ್ರತಿಭೆಗಳು ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಸೈಕೋ ಶಂಕರ, ಕಂಡ್ಹಿಡಿ ನೋಡೋಣ ಚಿತ್ರದ ನಾಯಕ ನಟ ಪ್ರಣವ ಸೂರ್ಯ ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರ ತಂಡ ಎರಡನೇ ಭಾಗವನ್ನು ತೆರೆಯ ಮೇಲೆ ತರುವ ಮುನ್ಸೂಚನೆಯನ್ನು ಕೊನೆಯಲ್ಲಿ ತಂದಿದ್ದಾರೆ.

ಇಂತಹ ಸಿನಿಮಾಗಳಿಗೆ ಪ್ರೇಕ್ಷಕರು ಬೆಂಬಲಿಸಿದರೆ ನಮ್ಮ ಮಣ್ಣಿನ ಜನಪದ ಸೊಗಡಿನ ಹಲವಾರು ಸಾಂಸ್ಕೃತಿಕ ಕಲೆಗಳು ಜಗತ್ತಿಗೆ ತೆರೆದುಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಸಂಗೀತ ನಿರ್ದೇಶಕ ಬಹಳ ಮುತುರ್ವಜಿಯಿಂದ ಎಲ್ಲೂ ಅಭಾಸವಾಗದಂತೆ ಯಕ್ಷಗಾನ ರೂಪಿಕೆಯನ್ನು ಒಂದು ಸಿನಿಮಾವಾಗಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಇವರ ಪ್ರಯತ್ನಕ್ಕೆ ಪ್ರೇಕ್ಷಕ ಪ್ರಭುಗಳು ಕೈ ಹಿಡಿಯ ಬೇಕಷ್ಟೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor