ಕಲರ್ಸ್‌ ಕನ್ನಡದಲ್ಲಿ ಇದೇ ಜನವರಿ 27ರಿಂದ ಎರಡು ವಿಭಿನ್ನ ಧಾರಾವಾಹಿಗಳ ಪ್ರಸಾರ ಆರಂಭ

ಭಾವನೆಗಳ ಸಂಘರ್ಷದ “ಗೌರಿ ಕಲ್ಯಾಣ” ಧಾರಾವಾಹಿ ಪ್ರತಿ ರಾತ್ರಿ 8ಕ್ಕೆ ಪ್ರಸಾರ

ನಾರಿಶಕ್ತಿಯ ಮತ್ತೊಂದು ಮಗ್ಗಲು ಪ್ರದರ್ಶಿಸುವ “ಪವಿತ್ರ ಬಂಧನ” ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 10ಕ್ಕೆ ಪ್ರಸಾರ

ಕನ್ನಡ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಹರಿಸುವ ನಿಮ್ಮ ನೆಚ್ಚಿನ ಕಲರ್ಸ್‌ ಕನ್ನಡ ವಾಹಿನಿ, ಇದೀಗ ಎರಡು ಮನಮಿಡಿಯೋ ಹೊಸ ಕಥೆಗಳನ್ನು ನಿಮ್ಮ ಮಡಿಲಿಗೆ ಹಾಕಲು ಸಜ್ಜಾಗಿದೆ.

“ಗೌರಿ ಕಲ್ಯಾಣ”ದಲ್ಲಿ ತನ್ನ ಮೂರು ಹೆಣ್ಣುಮಕ್ಕಳನ್ನ ಒಳ್ಳೆ ಶ್ರೀಮಂತ ಮನೆತನಕ್ಕೆ ಸೇರಿಸಬೇಕು ಅಂತ ತನಗೆ ತಾನೆ ಮಾತು ಕೊಟ್ಕೊಂಡಿರೋ ಅಮ್ಮ, “ಪವಿತ್ರ ಬಂಧನ”ದಲ್ಲಿ ತಮ್ಮನ ಖುಷಿಗೋಸ್ಕರ ಏನ್ ಬೇಕಾದ್ರು ಮಾಡ್ತೀನಿ ಅಂತ ಮಾತು ಕೊಟ್ಟಿರೋ ಅಣ್ಣ. ಈ ಎರಡು ಭಿನ್ನ ಕಥೆಗಳು ಇದೇ ಜನವರಿ 27ರ ಮಂಗಳವಾರದಿಂದ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿವೆ.

ಗೌರಿ ಕಲ್ಯಾಣ
ಮಧ್ಯಮ ವರ್ಗದ, ಸಂಪ್ರದಾಯಸ್ಥ ಮನೆತನದ ಸಭ್ಯ ಗೃಹಿಣಿ ಕಾಂತಲಕ್ಷ್ಮಿಗೆ ಮೂವರು ಸುಂದರ ಹೆಣ್ಣುಮಕ್ಕಳು. ಮೋನಿಕಾ, ಗೌರಿ ಮತ್ತು ಚಿನ್ಮಯಿ. ತನ್ನ ಮೂರೂ ಮಕ್ಕಳನ್ನು ಶ್ರೀಮಂತ ಕುಟುಂಬಕ್ಕೆ ಸೊಸೆಯಾಗಿ ಕಳಿಸಬೇಕು ಅನ್ನೋ ಮಹದಾಸೆ ಆಕೆಯದ್ದು. ಬಡತನದಲ್ಲಿ ತಾನು ಅನುಭವಿಸಿದ ಕಷ್ಟ ತನ್ನ ಮಕ್ಕಳು ಅನುಭವಿಸಬಾರದು ಎಂದದು ಹಂಬಲಿಸೋ ಆ ತಾಯಿಗೆ, ತನ್ನ ಮಕ್ಕಳ ಸುಂದರ ಭವಿಷ್ಯದ್ದೇ ಕನಸು. ದೀನಬಂಧು ಮನತನದ ಶ್ರೀಮಂತಿಕೆಗೆ ಮರುಳಾಗಿ ತಾಯಿ ತನ್ನ ದೊಡ್ಡಮಗಳನ್ನು ಆ ಮನೆಗೆ ಸೊಸೆಯಾಗಿಸಲು ಹಂಬಲಿಸ್ತಾಳೆ. ಅದಕ್ಕಾಗಿ ಪರಿಪರಿಯಾದ ಪ್ರಯತ್ನ ಮಾಡ್ತಾಳೆ.

ಆಕೆಯ ಆ ಪ್ರಯತ್ನ, ಆಕೆ ತನ್ನ ಗುರಿ ಸಾಧನೆಗೆ ಹಿಡಿದ ದಾರಿ ಆಕೆಯ ಮಕ್ಕಳಿಗೆ ಹೂವಿನ ಹಾಸಿಗೆ ಹಾಸುತ್ತೋ? ಅಥವಾ ಮುಳ್ಳಿನ ದಾರಿಯಾಗುತ್ತೋ? ಕಾದುನೋಡಬೇಕು. ಮುಂದಿನ ದಿನಗಳಲ್ಲಿ ಇವರು ಎದುರಿಸುವ ಭಾವನಾತ್ಮಕ ಸವಾಲುಗಳು ಎಂಥವು? ಮದುವೆಯ ನಂತರ ಘಟಿಸೋ ತಿರುವುಗಳೇನು? ಅನ್ನೋದೆ “ಗೌರಿಕಲ್ಯಾಣ” ಧಾರಾವಾಹಿಯ ಜೀವಾಳ.

ಇಲ್ಲಿ ಕಥಾನಾಯಕಿ ಗೌರಿ, ಓರ್ವ ಬೆರಗುಗಣ್ಣಿನ ಕನಸುಗಾರ್ತಿ. ಆಕೆಗೆ ಸಂಬಂಧಗಳೇ ಉಸಿರು. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಸಿಡಿದೇಳುವ ಗಟ್ಟಿಗಿತ್ತಿ! ತಾನಾಯ್ತು ತನ್ನ ಪುಟ್ಟ ಕುಟುಂಬದ ಹಿತವೇ ಆಕೆಯ ಡೆಸ್ಟಿನೇಷನ್.‌ ತನ್ನ ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕು ಎಂದು ಕನಸು ಕಾಣೋ ಸ್ವಾವಲಂಬಿ ಜೀವ. ಒಬ್ಬ ಒಳ್ಳೆಯ ಡಿಸೈನರ್ ಆಗಬೇಕೆಂಬ ಛಲ ಅವಳಲ್ಲಿದೆ. ಯಾರ ಹಂಗಲ್ಲೂ ಬದುಕದೇ ಸ್ವಂತ ಶಕ್ತಿಯ ಮೇಲೆ ನಿಲ್ಲಬೇಕೆಂಬ ಹಠ ಅವಳದ್ದು. ಆದರೆ, ಬದುಕು ಅಡೆತಡೆ ಇಲ್ಲದ ಸಲೀಸು ರಸ್ತೆಯಲ್ಲವಲ್ಲ!

ಮಧ್ಯಮ ವರ್ಗದ ಜನರ ಸರಳತೆ ಮತ್ತು ಶ್ರೀಮಂತ ಸಮಾಜದ ನಿರೀಕ್ಷೆಗಳ ನಡುವೆ ನಡೆಯುವ ಭಾವನಾತ್ಮಕ ಹೋರಾಟ “ಗೌರಿ ಕಲ್ಯಾಣ”ದ ಹೈಲೈಟ್‌. ಇಲ್ಲಿ ಹಣ ಮತ್ತು ಅಧಿಕಾರದ ಅಮಲಿದೆ, ಮೇಲ್ವರ್ಗ ಕೆಳವರ್ಗಗಳ ನಡುವಿನ ಸಂಘರ್ಷವೂ ಕಾಣಿಸುತ್ತದೆ. ಸಂಬಂಧಗಳಲ್ಲಿನ ಮೌಲ್ಯಗಳನ್ನು ಸಾರುವುದಷ್ಟೇ ಅಲ್ಲದೆ, ಅಕ್ಕ-ತಂಗಿಯರ ನಡುವಿನ ಬಾಂಧವ್ಯಕ್ಕೂಈ ಧಾರಾವಾಹಿ ಕನ್ನಡಿಯಾಗಲಿದೆ. ಶ್ರೀಮಂತ ಮತ್ತು ಬಡವ ಅನ್ನೋ ಎರಡು ವರ್ಗಗಳ ನಡುವಿನ ಕಂದಕ ಎಷ್ಟು ಆಳವಿದೆ ಅನ್ನೋದನ್ನೂ ಈ ಧಾರಾವಾಹಿ ಮಾರ್ಮಿಕವಾಗಿ ಬಿಚ್ಚಿಡಲಿದೆ.

ಗೌರಿಕಲ್ಯಾಣ ಧಾರಾವಾಹಯಲ್ಲಿ ಗೌರಿಯಾಗಿ ಶಿಲ್ಪಾ ಕಾಮತ್‌, ವಿವೇಕ್‌ ಚಕ್ರವರ್ತಿಯಾಗಿ ಶರತ್‌ ಕುಮಾರ್‌, ಕಾಂತಲಕ್ಷ್ಮೀ ಪಾತ್ರದಲ್ಲಿ ದೀಪಿಕಾ ಶರಣ್‌ ಶೆಟ್ಟಿ, ಶಾಂತವೀರಣ್ಣ ಪಾತ್ರದಲ್ಲಿ ಅಶೋಕ್‌ ಜಂಬೆ, ಮೋನಿಕಾ ಪಾತ್ರದಲ್ಲಿ ಸಹನಾ, ಚಿನ್ಮಯಿ ಪಾತ್ರದಲ್ಲಿ ನಿಹಾರಿಕಾ ಶೆಟ್ಟಿ, ಚಕ್ರವರ್ತಿ ಪಾತ್ರದಲ್ಲಿ ಗುರುದತ್‌, ಸರಿತಾ ಪಾತ್ರದಲ್ಲಿ ಶೀಲಾ, ಚಂಚಲ ಪಾತ್ರದಲ್ಲಿ ಜ್ಯೋತಿ ನಟಿಸುತ್ತಿದ್ದಾರೆ. ರಾಮ್‌ಜಿ ಈ ಸೀರಿಯಲ್‌ ನಿರ್ಮಾಣ ಮಾಡುತ್ತಿದ್ದು, ಭರತ್‌ ಕುಮಾರ್‌ ಎನ್‌ ಮೈಸೂರು ನಿರ್ದೇಶನ ಇರಲಿದೆ. ಪ್ರೋಮೋ ಮೂಲಕ ಗಮನ ಸೆಳೆದ “ಗೌರಿ ಕಲ್ಯಾಣ” ನೋಡುಗರಿಗೆ ಈ ಹೊಸತನದ ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor